ಮನು ಪ್ರಸಾದ್ ಮೈಸೂರು
ರುದ್ರ ಭದ್ರಕಾಳಿ,ಬೇತಾಳ 108 ಅಡಿ,ಕಾಲ ಭೈರವ,ನಾಗಮ್ಮ,ಕಾಟೇರಮ್ಮ,ಪ್ರತ್ಯಂಗೀರಾ ದೇವಿ,ಪಾರ್ವತಿ ದೇವಿ,ಕರಿಕುಟ್ಟಿ,ವಿಷ್ಣುಮಾಯ,ವೀರಭದ್ರಸ್ವಾಮಿ,ಓಂ ಶಕ್ತಿ ಸೇರಿದಂತೆ ಅನೇಕ ದೇವರನ್ನ ಒಂದೇ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಇಂತಹ ಅದ್ಬುತ ದೇವಾಲಯ ಕಟ್ಟಿದವರು ಶ್ರೀ ಅಗೋರಿ ಚಂದ್ರನಾಥ್ ಸ್ವಾಮೀಜಿಗಳು.
ಇಡೀ ಪ್ರಪಂಚದಲ್ಲಿ ಎಲ್ಲಿಯೂ ಕಾಣದ 108 ಅಡಿ ಬೇತಾಳ ವಿಗ್ರಹ ಪ್ರತಿಷ್ಟಾಪನೆ ಯಾಗಿರುವ ಸ್ಥಳ ಐವಾರಹಳ್ಳಿಯ ರುದ್ರ ಭದ್ರಕಾಳಿ ಮತ್ತು ಬೇತಾಳ ಮಹಾಶಕ್ತಿ ಪೀಠ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಪಕ್ಕದಲ್ಲಿ ಇರುವ ಐವಾರಹಳ್ಳಿ ಗ್ರಾಮದಲ್ಲಿ ಇದೆ.
ಅಘೋರಿ ಚಂದ್ರನಾಥ್ ಇವರು 16 ಅಘೋರಿ ಧೀಕ್ಷೆ ಪಡೆದು ಇಲ್ಲಿ ಅವರ ಸ್ವಂತ ಊರು ಐವಾರಹಳ್ಳಿಯಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ.ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸಿ ತಮಗಾದ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುತ್ತಾರೆ.ಪ್ರತಿ ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಯಂದು ದೇವಾಲಯಕ್ಕೆ ಆಗಮಿಸುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಇರಲಿದೆ.
ಪ್ರತಿ ಶುಕ್ರವಾರ,ಅಮಾವಾಸ್ಯೆ,ಹುಣ್ಣಿಮೆಯಲ್ಲಿ ವಿಶೇಷ ಪೂಜೆ ಇರಲಿ.
ಬೆಳಗ್ಗೆ 5 ರಿಂದ ಸಂಜೆ 7 ಗಂಟೆಯವರಗೆ ದೇವರಿಗೆ
ಹಾಲಿನ ಅಭಿಷೇಕ,ಹೂವು,ತುಪ್ಪ,ಗಂಧ,ವಿಭೂತಿ,ಕುಂಕುಮ,ಅರಿಶಿನ ಅಭಿಷೇಕ ಮಾಡಲಾಗುವುದು.
ಪ್ರತಿ ಶುಕ್ರವಾರ 11 ರಿಂದ 12 ಗಂಟೆಗೆ ಮಹಾ ಮಂಗಳಾರತಿ,12 ರಿಂದ 12:30 ವರಗೆ
ಭೂತ ಪ್ರೇತ ಬಿಡಿಸಲಾಗುವುದು.
ಇಲ್ಲಿ ವಿಶೇಷವಾಗಿ ಮಾಟ ಮಂತ್ರ,ವ್ಯಾಪಾರದಲ್ಲಿ ತೊಂದರೆ,ಸಂಸಾರದಲ್ಲಿ ತೊಂದರೆ,ದಾಂಪತ್ಯ ವಿರಹ,ಕೋರ್ಟ್ ಕೇಸ್,ಗಾಳಿ,ದೆವ್ವ ಬಿಡಿಸುವುದು,ಕುಡಿತ ಬಿಡಿಸುವುದು,ಶುಗರ್ ಕಾಯಿಲೆಗೆ ಉಚಿತವಾಗಿ ಔಷಧಿ ನೀಡಲಾಗುವುದು.ಕುಡಿತ ಬಿಡಿಸಲು ಅನೇಕ ರಾಜ್ಯಗಳಿಂದ ಜನರು ಇಲ್ಲಿಗೆ ಬರುತ್ತಾರೆ.ಇದಲ್ಲದೇ ಕ್ಯಾನ್ಸರ್ ರೋಗಿಗಳಿಗೂ ಕೂಡ ಆಯುರ್ವೇದ ಔಷಧಿ ಮೂಲಕ ಪರಿಹಾರ ದೊರೆಯಲಿದೆ.
ರುದ್ರ ಭದ್ರಕಾಳಿ ಮತ್ತು ಬೇತಾಳ ಮಹಾಶಕ್ತಿ ಪೀಠ ವಿಳಾಸ ಇಂತಿದೆ.
ಐವಾರಹಳ್ಳಿ ಕ್ಯಾಸಂಬಳ್ಳಿ ಹೋಬಳಿ,ಕೆಜಿಎಫ್ ತಾಲೂಕು
ಕೋಲಾರ ಜಿಲ್ಲೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9590227888
9036211576