ನಂದಿನಿ ಮೈಸೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮೈಸೂರು ತಾಲೂಕು ಕಳಸ್ತವಾಡಿ ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಕಳಸ್ತವಾಡಿ ವಲಯದ ಸಾಧನ ಸಮಾವೇಶ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಹೊರವಲಯದಲ್ಲಿರುವ ಶ್ಯಾದನಹಳ್ಳಿಯಲ್ಲಿ ಆಯೋಜಿಸಿದ್ದ ಸಾಧನಾ ಕಾರ್ಯಕ್ರಮಕ್ಕೆ
ಮೇಟಗಳ್ಳಿ ಪೋಲಿಸ್ ನಿರೀಕ್ಷಕ ದಿವಾಕರ್,ಜಿಲ್ಲಾ ನಿರ್ದೇಶಕ ಲಕ್ಷ್ಮಣ್ , ಗ್ರಾಂ.ಪ ಸದಸ್ಯ ಟಿ.ನಾರಾಯಣ್ ಸೇರಿದಂತೆ ವೇದಿಕೆ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
18 ಮಂದಿಗೆ ಮಾಶಾಸನ ಮಂಜೂರಾತಿ ಪತ್ರ ವಿತರಣೆ, ಸುಜ್ಞಾನ ನಿಧಿ ವೇತನ,ಆಯುಷ್ಮಾನ ಕಾರ್ಡ್ ,
ಇ ಶರ್ಮ್ ಕಾರ್ಡ್,ಸೋಲರ್,ಪಾನ್ ಕಾರ್ಡ್,ಗ್ರೀನ್ ವೇ ಕುಕ್ಕ್ ಸ್ಟೌ ವ್,ಹೊಸ ಸಂಘ ರಚನೆ ಪುಸ್ತಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ
ನಂದಿನಿ,ತ್ಯಾಗರಾಜು,ಲಾಯರ್ ವಿಷಕಂಠ,ನಾಗೇಶ್,ತಮ್ಮಯ್ಯ,ಅಚಲುವಯ್ಯ,ಅನಂತರಾಮಯ್ಯ,ಮೋಹನ್ ಹೊಸಹಳ್ಳಿ,ಮೇಲ್ವಿಚಾರಕರಾದ
ಟಿ.ವಸಂತ ಹಾಗೂ ಧರ್ಮಸ್ಥಳ ಸಂಘದ ಸದಸ್ಯರು, ವಲಯದ ಸೇವಾ ಪ್ರತಿನಿಧಿಗಳು, ಶ್ಯಾದನಹಳ್ಳಿ ಗ್ರಾಮಸ್ಥರು ಭಾಗಿಯಾಗಿದ್ದರು.