ಶ್ರೀ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಕಡೇ ಕಾರ್ತಿಕ ಸೋಮವಾರ ಹಿನ್ನಲೆ ಅನ್ನ ಸಂತರ್ಪಣೆ

ನಂದಿನಿ ಮೈಸೂರು

ಸುಮಾರು ನೂರು ವರ್ಷ ಇತಿಹಾಸವಿರುವ ಶ್ರೀ ಶನೇಶ್ವರ ಹಾಗೂ ಶ್ರೀ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಕಡೇ ಕಾರ್ತಿಕ ಸೋಮವಾರದಂದು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಹಿಂದೆ ಶ್ರಾವಣ ಮಾಸದಲ್ಲಿ
ಅರಮನೆಯಿಂದ ಬೆಳ್ಳಿ ಪಲ್ಲಕ್ಕಿ
ಆರಮನೆ ಆನೆ ಜೊತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು.ಶ್ರಾವಣ ಮಾಸ ಅಲ್ಲದೇ ಕಾರ್ತೀಕ ಮಾಸದಲ್ಲಿ 4 ಸೋಮವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನಡೆಯುತ್ತದೆ. ಕಡೇ ಕಾರ್ತೀಕ ಸೋಮವಾರ ಹಿನ್ನಲೆ ಎರಡು ಸಾವಿರ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.ರವಿ ರಾಜಕೀಯರವರು ಮುಂಬರುವ ಮೈಸೂರು ಮಹಾನಗರ ಪಾಲಿಕೆ ಆಕಾಂಕ್ಷಿಯಾಗಿದ್ದು ಅವರಿಗೆ ಅಧಿಕಾರ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ ರೇವಣ್ಣ ತಿಳಿಸಿದರು.

ನಂತರ ಕಾಂಗ್ರೆಸ್ ಮುಖಂಡರಾದ ರವಿ ರಾಜಕೀಯ ಮಾತನಾಡಿ ಮಲೈ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ರೇವಣ್ಣರವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು
ಗಿರೀಶ್ ,ಪಾಲಿಕೆ ಸದಸ್ಯ ಬಾಲರಾಜು, ,ಜಗದೀಶ್,ಟಿ.ಉಮೇಶ್,ಪುಟ್ಟರಾಜು,ನಾಗಣ್ಣ,ಶೇಖರ್ ,ಕೃಷ್ಣ ಕುಮಾರ್(ಕುಮ್ಮಿ),ಕುಮಾರ್ ಸೈಕಲ್,ವೆಂಕಿ ,ಶ್ರೀನಿವಾಸ್ (ಬಿಡ್ಡ),ವಿಠಲ,ಕಣ್ಣ ,ತರುಣ್,ಸುದೀನ,ಆಟೋ ರಾಜು,ಸುರೇಶ್ ಗೋಲ್ಡ್ ಸೇರಿದಂತೆ
ಮಂಡಿ ಮೊಹಲ್ಲಾದ ಮುಖಂಡರು ಭಾಗಿಯಾಗಿದ್ದರು .

Leave a Reply

Your email address will not be published. Required fields are marked *